‘ಕನಕ ಮನೆ ಮನೆ ತನಕ’ – ಎಂಬ ಅರ್ಥಪೂರ್ಣ ಶೀರ್ಷಿಕೆಯೊಂದಿಗೆ, ಕನಕದಾಸರ ತತ್ವ- ಸಾಹಿತ್ಯವನ್ನು ವ್ಯಾಪಕವಾಗಿ ಪ್ರಚುರಪಡಿಸುವ ಉನ್ನತ ಆಶಯದಿಂದ, ಕರ್ನಾಟಕ ಸರ್ಕಾರ- ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ-ಬೆಂಗಳೂರು ಮತ್ತು ಸಂಗೀತ ಸಂಭ್ರಮ (ರಿ) ಬೆಂಗಳೂರು ಇವರು ಜಂಟಿಯಾಗಿ, ದಿ. 4 ನೇ ತಾ. ನಿಂದ 6 ನೇ ತಾ. ವರೆಗೆ ವಿವಿಧ ಸಭಾಂಗಣಗಳಲ್ಲಿ ಮನೋಲ್ಲಾಸದ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಗಳಿಂದ ಗುರುತಿಸಿಕೊಂಡಿರುವ ಕೆಲ ಸಾಧಕರನ್ನು ಗೌರವಿಸುವ-ಪುರಸ್ಕರಿಸುವ ಸಮಾರಂಭವೂ ಇವೆ. ಇವುಗಳನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಸಾಹಿತ್ಯಾಭಿಮಾನಿಗಳಿಗೂ ಆದರದ ಸುಸ್ವಾಗತ.
previous post
YK Sandhya Sharma
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.