ಇಂದು ಪ್ರಸಿದ್ಧ ಪುರಿ ಜಗನ್ನಾಥನ ‘ರಥಯಾತ್ರ’ದ ಮಹತ್ವದ ದಿನ. ಈ ಸುಸಂದರ್ಭದಲ್ಲಿ ಖ್ಯಾತ ‘ಅಭಿವ್ಯಕ್ತಿ ‘ನೃತ್ಯಸಂಸ್ಥೆಯ ಒಡಿಸ್ಸಿ ನೃತ್ಯಕಲಾವಿದೆ ಮತ್ತು ನಾಟ್ಯಗುರು ಮಾನಸಿ ರಘುನಂದನ್ ಅವರ ಶಿಷ್ಯರಾದ ಸೌಮ್ಯ ಲೋಹಿತ್ ಮತ್ತು ನಯನಾ ಈ ದಿನ ಸಂಜೆ 7.30 ಕ್ಕೆ ಫೇಸ್ ಬುಕ್ಕಿನಲ್ಲಿ ತಮ್ಮ ಮನೋಹರ ಒಡಿಸ್ಸಿ ನಾಟ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ದಯವಿಟ್ಟು ಎಲ್ಲರೂ ಇವರ ನೃತ್ಯವನ್ನು ನೋಡಿ ಆನಂದಿಸಿ ಎಂದು ಕೋರುತ್ತೇನೆ. ಈ ಸಂದರ್ಭದಲ್ಲಿ ನಾನೂ ಇರುತ್ತೇನೆ ಗೌರವಾನ್ವಿತ ಅತಿಥಿಯಾಗಿ. ಜಗನ್ನಾಥನ ನೃತ್ಯಾರಾಧನೆಯಲ್ಲಿ ಎಲ್ಲರೂ ಪಾಲ್ಗೊಳೋಣ, ಮರೆಯದಿರಿ, ಇಂದು ಸಂಜೆ 7.30 ಕ್ಕೆ. ಕಾರ್ಯಕ್ರಮದ ಲಿಂಕನ್ನು ಕೆಳಗೆ ಕೊಡಲಾಗಿದೆ.
previous post
next post
YK Sandhya Sharma
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.