ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, 'ಅಭಿನವ ಪ್ರಕಾಶನ' ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮೈಸೂರು ಸೊಗಡಿನ `ನೂಪುರ ಭರತನಾಟ್ಯ ಶಾಲೆ’ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಮೈಸೂರು ಶೈಲಿಯ ಭರತನಾಟ್ಯವನ್ನು ಕಲಿಸುವ ನಿಷ್ಠೆ, ಕಲಾತ್ಮಕತೆ ಮತ್ತು ಅನ್ವೇಷಕ...
ರಂಗದ ಮೇಲೆ ನರ್ತಿಸುತ್ತಿದ್ದ ಬಾಲೆಯ ವಯಸ್ಸು ಸಣ್ಣದಾದರೂ ಅವಳು ತೋರುತ್ತಿದ್ದ ಭಾವಾಭಿವ್ಯಕ್ತಿ, ಲೀಲಾಜಾಲವಾದ ಆಂಗಿಕ ಅಭಿನಯ ಕಲಾಭಿಮಾನಿಗಳ ಮನಸೂರೆಗೊಂಡಿತ್ತು. ಪ್ರತಿ ಕೃತಿಯ ಅಂತ್ಯದಲ್ಲೂ ಮೆಚ್ಚುಗೆಯ...
ಬೆಂಗಳೂರಿನಲ್ಲಿರುವ ಕೆಲವೇ ನೃತ್ಯಶಾಸ್ತ್ರ ನಿಪುಣರಲ್ಲಿ ಡಾ.ವಿದ್ಯಾ ರಾವ್ ಅವರೂ ಒಬ್ಬರು. ಪ್ರತಿಭೆ, ಅಭ್ಯಾಸ, ಆಸಕ್ತಿಯುಳ್ಳ ಯಾರು ಬೇಕಾದರೂ ನೃತ್ಯ ಕಲಿಯಬಹುದು, ನೃತ್ಯ ಪ್ರದರ್ಶನಗಳ ಮೂಲಕ ಅನುಭವ ಗಳಿಸಬಹುದು, ವಿಶೇಷ ಅಧ್ಯಯನಗಳಿಂದ ಪರಿಣತಿ ಸಾಧಿಸಬಹುದು, ಅನಂತರ ನಾಟ್ಯಗುರುಗಳಾಗಬಹುದು. ಆದರೆ ನೃತ್ಯದ ಶಾಸ್ತ್ರಾಧ್ಯಯನ, ಸಂಶೋಧನೆಗಳನ್ನು ಮಾಡಿ ನೃತ್ಯದ ವ್ಯಾಕರಣದ ಮೇಲೆ ಹಿಡಿತ ಅಥವಾ ಪ್ರಭುತ್ವ ಸಾಧಿಸುವುದು ಬಹು ಕಠಿಣವೇ ಸರಿ . ಶಾಸ್ತ್ರ ಎಂದೂ ಶುಷ್ಕವೇ . ಸಂಶೋಧನೆ ಕೂಡ ಬಹು ಪರಿಶ್ರಮವನ್ನು ಬೇಡುವಂಥದ್ದು. ಇಂಥ ವಿಷಯಗಳ ಬಗ್ಗೆ ಆಸಕ್ತಿ ತಳೆಯುವುದು, ಅದರ ಬಗ್ಗೆ ವಿಶೇಷ ಅಧ್ಯಯನ ಮಾಡುವುದು, ಅನಂತರ ಶಾಸ್ತ್ರಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದು, ಸುಲಭದ ಮಾತಲ್ಲ. ಹೀಗಾಗಿ ಈ ಕ್ಷೇತ್ರ ಬಹು ಜನರ ಆಯ್ಕೆಯಾಗಿರುವುದಿಲ್ಲ. ಇಂಥ ಕಾಯಕವನ್ನು ಇಷ್ಟಪಟ್ಟು, ಆರಿಸಿಕೊಂಡು ಇಂದು ನೂರಾರು ಎಂ.ಎ.ವ್ಯಾಸಂಗ ಮಾಡುವ ನೃತ್ಯ ವಿದ್ಯಾರ್ಥಿಗಳಿಗೆ,ವಿದ್ವತ್ ಮತ್ತು ಅಲಂಕಾರ,ಆಮೂಲಾಗ್ರವಾಗಿ ಶಾಸ್ತ್ರಪಾಠಗಳನ್ನು ಮಾಡುತ್ತಿರುವ ವಿದ್ಯಾ ರಾವ್ ಅವರ ಕಾರ್ಯ ಶ್ಲಾಘನೀಯ ಮೂಲತಃ ಮರಾಠಾವಾಡದ ಪಾಳೇಗಾರರ ಮನೆತನಕ್ಕೆ ಸೇರಿದ ವಿದ್ಯಾ ಅವರ ಹಿರೀಕರು ಸಮಾಜದಲ್ಲಿ ನಾಯಕರಾಗಿ ಬಾಳಿದವರು. ...
ಹೀಗೂ ಉಂಟೇ ಎಂದೆನಿಸುವ, ನಿಜಕ್ಕೂಇದೊಂದು ಕುತೂಹಲಕರ ಕಥೆ. ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ನಿದರ್ಶನ ಅಮೇರಿಕಾದ ಶಿಕಾಗೋನಲ್ಲಿ ವಾಸವಾಗಿರುವ ಸಾಫ್ಟ್ ವೇರ್ ಎಂಜಿನಿಯರ್,...